Thursday, 2 February 2012

ಪ್ರಕೃತಿ ಕಲಿಸದೆ .....ಪಾಠ ?




ನಿನ್ನೆ ಗುಬ್ಬಚ್ಚಿ ಕಂಡ ಖುಷಿ ....ಅದೇ ನೆನಪಲ್ಲೇ ಇಂದು ಬೆಳಗ್ಗೆ ಎದ್ದವನೇ ತೋಟಕ್ಕೆ ಓಡಿದೆ..
ಅದಾಗಲೇ.... ಗೀಜಗ ಹಕ್ಕಿ ಮನಸ್ಸನ್ನಾವರಿಸಿತ್ತು.....!
ಗೀಜಗ ....ಅದರ ಗೂಡನ್ನ ನೋಡುವುದೇ ....ಸೋಜಿಗ....!
ಎಲ್ಲರೂ ಮನೆಯನ್ನ ಕಟ್ತಾರೆ ....ಹೆಚ್ಚೆಂದರೆ ಮನೆಯೊಳಗೆ ತೂಗುಯ್ಯಾಲೆ ಇಡ್ತಾರೆ 
ಆದರೆ .... ಹಕ್ಕಿ ಇದೆಯಲ್ಲ ....ಗೀಜಗ ಇದು ಕಟ್ಟುವ ಮನೆಯೆ ತೂಗುಯ್ಯಲೆಯಂತಿರುತ್ತದೆ....!
ಮುಂಚೆ ನಮ್ಮನೆ ತೋಟದಲ್ಲಿ ನೂರಾರು ಗೀಜಗ ಗೂಡು ಕಟ್ಟಿರುತಿತ್ತು
ಈಗ ಹೋಗಿ ನೋಡಿದರೆ ....ನಿರಾಸೆ ಕಾದಿತ್ತು ಒಂದೇ ಒಂದು ಗೂಡೂ ಕಣ್ಣಿಗೆ ಗೋಚರಿಸಲಿಲ್ಲ .
ಮಾನವನ ಆಧುನಿಕತೆಯ ನಾಗಾಲೋಟದಲ್ಲಿ ಗೀಜಗ ನಂತ ಅದೆಷ್ಟೋ ಜೀವ ಜಂತುಗಳು  
ವಿನಾಶದೆಡೆಗೆ ಜಾರಿದವೋ .....ಗಮನಿಸುವ ಪುರುಸೊತ್ತು .ವ್ಯವಧಾನ ನಮಗೆಲ್ಲಿದೆ ಹೇಳಿ ....?
ಓಡುತ್ತಲೇ ಇದ್ದೇವೆ .....ಮುಟ್ಟುವ ಗುರಿ ಮಾತ್ರ ......ಅಗೋಚರ ...!
ಭೂಮಿಯ ಒಡಲನ್ನ ,ಪ್ರಕೃತಿ ಮಡಿಲನ್ನ,ಅಮೂಲ್ಯ ಜೀವಸಂಕುಲವನ್ನ ....
ಹೀಗೆ ಎಲ್ಲವನ್ನ ಬರಿದಾಗಿಸುತ್ತಿದ್ದೇವೆ .....ಎಷ್ಟು ತಿಂದರೂ ತೇಗದು ನಮ್ಮ ಒಡಲು...
ಏನೇ ಇರಲಿ ... ಪ್ರಕೃತಿ ಬದುಕನ್ನು ಕಟ್ಟಿಕೊಡುತ್ತದೆ :ಬದುಕನ್ನು ಕಸಿದುಕೊಳ್ಳಲಾರದು ,
ಪರಸ್ಪರ ಪೀತಿಸುವುದನ್ನು ಕಲಿಸುತ್ತದೆ:ಪ್ರೀತಿಸುವುದನ್ನೇ ಆಶಿಸುತ್ತದೆ ....
ಅನುಭವ ಬದುಕನ್ನು ಮುನ್ನಡೆಸುತ್ತದೆ..ಎಲ್ಲೋ ಕೇಳಿದ ನೆನಪು ..
"ಪ್ರಕೃತಿಗಿಂತ ಚೆನ್ನಾಗಿ ಯಾರು ಪಾಠವನ್ನು ಕಲಿಸಬಲ್ಲರು ...?
ಅನುಭವಕ್ಕಿಂತ ಚೆನ್ನಾಗಿ  ಜೀವನ ವಜ್ರವನ್ನ ಯಾರು ಸಾಣೆ ಹಿಡಿಯಬಲ್ಲರು....?"
ಈಗಾಗಲೇ... ಪ್ರಕೃತಿ ಗುಬ್ಬಿಗೆ ಬದುಕುವ ಪಾಠ ಕಲಿಸಿದೆ ; ಮುಂದೊಂದು ದಿನ ಗೀಜಗನಿಗೂ 
ಬದುಕುವ ಭಾಗ್ಯ ದಕ್ಕಬಹುದು... ಆದರೆ ...ಇದೇ ರೀತಿ ಭೂಮಿಯ ಒಡಲನ್ನ ಬರಿದಾಗಿಸುತ್ತ ಹೋದರೆ .....
ನಮ್ಮನ್ನ ರಕ್ಷಿಸುವವರಾರು .....?
ಗೂಡು ಕಟ್ಟುವುದರಲ್ಲಿ ಗೀಜಗನಿಗಿರಬಹುದಾದ ಶ್ರದ್ಧೆ :ಬದುಕು ಕಟ್ಟಿ ಕೊಳ್ಳುವುದರಲ್ಲಿ ನಮಗೂ ಅಂತಹ ಕನಸುಗಳಿರಲಿ 
-ವಿಶ್ವೇಶ್ವರ ಎಂ ಎಸ್ 
ಸನ್ ಟೈಮ್ ಎಲೆಕ್ಟ್ರಾನಿಕ್ಸ್ 



No comments:

Post a Comment